Fri. Oct 10th, 2025

  • ಎನ್ಡಿಎಯ ರಾಧಾಕೃಷ್ಣನ್ದೇಶದ 15ನೇ ಉಪರಾಷ್ಟ್ರಪತಿ

ಸಂದರ್ಭ: ಜಗದೀಪ್‌ ಧನಕರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದರು. ಅವರು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರಿಗಿಂತ 152 ಹೆಚ್ಚು ಮತಗಳನ್ನು ಪಡೆದು ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಚುನಾಯಿತರಾದರು.

  • ರಾಧಾಕೃಷ್ಣನ್‌ ಅವರ ಪರವಾಗಿ ಒಟ್ಟು 452 ಮತಗಳು ಚಲಾವಣೆ ಯಾಗಿದ್ದರೆ, ಪ್ರತಿಸ್ಪರ್ಧಿ ಸುದರ್ಶನ ರೆಡ್ಡಿ ಅವರಿಗೆ 300 ಮತಗಳು ಬಂದಿವೆ ಎಂದು ಚುನಾವಣಾ ಅಧಿಕಾರಿ ಪಿ.ಸಿ. ಮೋದಿ ಅವರು ಪ್ರಕಟಿಸಿದರು.
  • ‘ಒಟ್ಟು 767 ಸಂಸದರು (ಶೇ 98.2) ಮತಚಲಾಯಿಸಿದ್ದು, ಅವುಗಳಲ್ಲಿ 752 ಮತಗಳು ಮಾನ್ಯಗೊಂಡಿವೆ ಮತ್ತು 15 ಮತಗಳು ಅಮಾನ್ಯಗೊಂಡಿವೆ. ಅಂಚೆ ಮತಪತ್ರ ಸಲ್ಲಿಸಿದ್ದ ಸಂಸದರೊಬ್ಬರು ‘ಅದನ್ನು ಪರಿಗಣಿಸಬೇಡಿ’ ಎಂದು ಆನಂತರ ಹೇಳಿದ್ದರಿಂದ ಅದನ್ನು ಪರಿಗಣಿಸಿಲ್ಲ.
  • ಅಡ್ಡಮತದಾನದ ಲಾಭ ಬಿಜೆಪಿಗೆ: ‘ರಾಧಾಕೃಷ್ಣನ್‌ ಅವರ ಪರವಾಗಿ ಕೆಲ ಅಡ್ಡಮತದಾನ ನಡೆದಿರುವುದನ್ನು ಫಲಿತಾಂಶ ಸೂಚಿಸುತ್ತದೆ. ವಿರೋಧ ಪಕ್ಷಗಳ ಕನಿಷ್ಠ 15 ಸದಸ್ಯರು ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ. ಅದಕ್ಕೂ ಮುನ್ನ ಮಾತನಾಡಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಇವೆ. ಎಲ್ಲ 315 ಸಂಸದರು ಮತ ಚಲಾಯಿಸಿದ್ದಾರೆ’ ಎಂದಿದ್ದರು.
  • ಯೋಜನೆಗಳಿಗೆಸುಪ್ರೀಂನಿರ್ಬಂಧಮಹದಾಯಿ-–ಕೋಟಿಗಾಂವ್ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆ ಕೂಡದು

ಸಂದರ್ಭ: ಮಹದಾಯಿ- ಕೋಟಿಗಾಂವ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

  • ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಧಾಮವು ಕಾಳಿ ಹುಲಿ ಮೀಸಲು ಪ್ರದೇಶ, ಭೀಮಘಡ ವನ್ಯಜೀವಿಧಾಮ ಮತ್ತು ಭಗವಾನ್‌ ಮಹಾವೀರ ರಾಷ್ಟ್ರೀಯ ಉದ್ಯಾನ ಒಳಗೊಂಡಂತೆ ಭೌಗೋಳಿಕವಾಗಿ ಕರ್ನಾಟಕದ ಜೊತೆಗೆ ಬೆಸೆದುಕೊಂಡಿದೆ.
  • ವನ್ಯಜೀವಿಧಾಮದಲ್ಲಿ ವಾಣಿಜ್ಯ ಯೋಜನೆಗಳಿಗೆ ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಗೋವಾ ಫೌಂಡೇಷನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ನಿರ್ದೇಶನ ನೀಡಿತು.
  • ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಪಕ್ಕದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅಧಿಸೂಚನೆ ಹೊರಡಿಸುವ ಸಂಬಂಧ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಆರು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಬಳಿಕ ವಿಚಾರಣೆಯನ್ನು ಎಂಟು ವಾರ ಮುಂದೂಡಿದೆ.
  • ಮಹದಾಯಿ ವನ್ಯಜೀವಿಧಾಮ ಹಾಗೂ ಆಸುಪಾಸಿನ ಪ್ರದೇಶಗಳನ್ನುಹುಲಿ ಸಂರಕ್ಷಣಾ ಮೀಸಲು ಅರಣ್ಯವೆಂದು ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಬಾಂಬೆ ಹೈಕೋರ್ಟ್ ಗೋವಾ ಪೀಠವು ಗೋವಾ ಸರ್ಕಾರಕ್ಕೆ 2023ರಲ್ಲಿ ನಿರ್ದೇಶನ ನೀಡಿತ್ತು.
  • ವನ್ಯಜೀವಿಧಾಮ ಹಾಗೂ ಸಮೀಪದ ಅರಣ್ಯ ಭಾಗದಲ್ಲಿ ಜನವಸತಿಗಳಿವೆ ಹಾಗೂ ಹುಲಿ ಗೋವಾದ ಸ್ಥಳೀಯ ವನ್ಯಜೀವಿ ಯಲ್ಲ ಎಂಬ ಕಾರಣ ನೀಡಿ ಮೀಸಲು ಅರಣ್ಯವಾಗಿ ಘೋಷಿಸಲು ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.
  • ಕರ್ನಾಟಕ, ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಅರಣ್ಯ ಭಾಗಗಳ ಜೊತೆಗೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ಮಹದಾಯಿ ವನ್ಯಜೀವಿ ಧಾಮದಲ್ಲಿ ಕೆಲವು ಹುಲಿಗಳು ಕಾಣಿಸಿಕೊಂಡಿದ್ದವು. ಇದನ್ನು ಹುಲಿ ಮೀಸಲು ಪ್ರದೇಶವಾಗಿ ಘೋಷಿಸಬೇಕು ಎಂಬ ಬೇಡಿಕೆ ಎದ್ದಿತ್ತು. ಕೆಲವು ವರ್ಷಗಳ ಹಿಂದೆ ಮಹದಾಯಿ ವನ್ಯಜೀವಿ ಧಾಮದಲ್ಲಿ ನಾಲ್ಕು ಹುಲಿಗಳ ಹತ್ಯೆಯಾಗಿತ್ತು.
  • ಪ್ರದೇಶವು ಹುಲಿ ಸಂತತಿ ವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇದನ್ನು ಮೀಸಲು ಅರಣ್ಯವಾಗಿ ಘೋಷಿಸಬೇಕು ಎಂದು ಎನ್ಟಿಸಿಎ ಸಲಹೆ ನೀಡಿತ್ತು.
  • ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಮಹದಾಯಿಯಲ್ಲಿ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಹಕ್ಕು ಹೊಂದಿವೆ. ಆದರೆ, ಅದಕ್ಕೆ ಪರಿಸರ ಮತ್ತು ಅರಣ್ಯ ಅನುಮತಿಗಳನ್ನು ಪಡೆಯಬೇಕಿದೆ. ಗೋವಾ ಸರ್ಕಾರ ಮತ್ತು ಅಲ್ಲಿನ ಪರಿಸರವಾದಿಗಳ ನಡುವಿನ ಹೋರಾಟವು ಕರ್ನಾಟಕದ ಮೇಲೆ ನೇರ ಪರಿಣಾಮ ಬೀರುವುದಿಲ್ಲ
  • ಜಿಬಿಎ: ಮೂರು ಅಂತಸ್ತಿನ ಕಟ್ಟಡಗಳಿಗೆ ಒಸಿ ವಿನಾಯಿತಿ

ಸಂದರ್ಭ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ 1,200 ಚದರ ಅಡಿವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.

  • ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಕಲಂ 241(7)ರಂತೆ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದ ಅನ್ವಯ ಈ ವಸತಿ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
  • 1,200 ಚದರ ಅಡಿ ನಿವೇಶನದಲ್ಲಿ ನೆಲ ಹಾಗೂ 2 ಅಂತಸ್ತು ಅಥವಾ ಸ್ಟಿಲ್ಟ್‌ + ಮೂರು ಅಂತಸ್ತಿನ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಲಾಗಿದೆ. ಜಿಬಿಎ ಮುಖ್ಯ ಆಯುಕ್ತರ ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿ ಸಣ್ಣ ಪ್ರಮಾಣದ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡುವುದರಿಂದ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಸಹಕಾರಿಯಾದಂತಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
  • ಪ್ರತಿ ವರ್ಷ 1,200 ಚದರಡಿಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಲ್ಲಿ ಸುಮಾರು ನಾಲ್ಕು ಸಾವಿರ ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡಲಾಗುತ್ತಿದೆ.
  • ಧಾರವಾಡದಲ್ಲಿ ಹಿಟಾಚಿ ಘಟಕ

ಸಂದರ್ಭ: ‘ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.

  • ಜಪಾನ್‌ ಪ್ರವಾಸದಲ್ಲಿರುವ ಅವರು ಹಿಟಾಚಿ ಕಂಪನಿಯ ಪ್ರತಿನಿಧಿಗಳ ಭೇಟಿಯ ನಂತರ ಹೊರಡಿಸಿದ ಪ್ರಕಟಣೆ ಯಲ್ಲಿ ಈ ಮಾಹಿತಿ ನೀಡಿದ್ದಾರೆ.
  • ಧಾರವಾಡದಲ್ಲಿ ಕೇಂದ್ರವು 2027 ವೇಳೆಗೆ ಕಾರ್ಯಾರಂಭ ಮಾಡಲಿದೆ. ವಾಹನಗಳ ಏರ್ಬ್ಯಾಗ್ ಬಿಡಿ ಭಾಗಗಳ ತಯಾರಿಕಾ ಕಂಪನಿ ಅಸಾಹಿ ಕಸೆಯಿ ಅಡ್ವಾನ್ಸ್ಡ್ಬೆಂಗಳೂರಿನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಸ್ಥಾಪಿಸುವುದಾಗಿ ಹೇಳಿದೆ’ ಎಂದಿದ್ದಾರೆ.
  • ಅಪರೂಪದ ಶಾಸನ ಪತ್ತೆ

ಸಂದರ್ಭ: ತಾಲ್ಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿನ ಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಲ್ಲಿನ ಉಭಯ ದೇವರುಗಳ ಆರಾಧನೆಯನ್ನು ಉಲ್ಲೇಖಿಸುವ ಅಪರೂಪದ ಅಪ್ರಕಟಿತ ಮ್ಯಾಂಗನೀಸ್ ಶಾಸನ ಪತ್ತೆಯಾಗಿದೆ.

  • 10 ಅಡಿ ಎತ್ತರವಿರುವ ಮ್ಯಾಂಗನೀಸ್ ಬಂಡೆಯಲ್ಲಿ 3 ಅಡಿ ಎತ್ತರ 3 ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಶಾಸನ ಕೆತ್ತಲಾಗಿದೆ.
  • ಮರುಜನ್ಮ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಶಾಸನ ಇದಾಗಿದ್ದು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂದು ಕೃಷ್ಣದೇವರಾಯ ವಿಶ್ವಾವಿದ್ಯಾಲಯದ ಪ್ರೊ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
  • ಮಿಜೋರಾಂ ರಾಜಧಾನಿಗೆ ರೈಲುಮಾರ್ಗ ಸಿದ್ಧ

ಸಂದರ್ಭ: ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್‌ಗೆ ಸಂಪರ್ಕಿಸುವ ರೈಲು ಮಾರ್ಗ ಕಣಿವೆಗಳ ನಡುವೆ ಅತ್ಯಧಿಕ ಸೇತುವೆ ಮತ್ತು ಸುರಂಗಗಳೊಂದಿಗೆ ಸಿದ್ಧಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ. 

  • ಈಶಾನ್ಯ ಭಾರತದ ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಇರಲಿಲ್ಲ.
  • ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ಉಳಿದ ಏಳು ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಾಮಗಾರಿಗೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
  • ಮಿಜೋರಾಂನ ರಾಜಧಾನಿ ಐಜ್ವಾಲ್ಕಡಿದಾದ ಬೆಟ್ಟಗಳ ಮೇಲೆ ಇರುವುದರಿಂದ ರೈಲು ಸಂಪರ್ಕ ಕಾಮಗಾರಿ ನಿಧಾನವಾಗಿ ನಡೆದಿದ್ದು, 11 ವರ್ಷಗಳ ಬಳಿಕ ಪೂರ್ಣಗೊಂಡಿದೆ.
  • ಅಸ್ಸಾಂನಿಂದ ಮಿಜೋರಾಂನ ಬೈರಾಬಿವರೆಗೆ ಬ್ರಾಡ್ಗೇಜ್ರೈಲು ಮಾರ್ಗ 2016ರಲ್ಲಿ ನಿರ್ಮಾಣವಾಗಿತ್ತು. ಬೈರಾಬಿಗೆ ಮೊದಲ ಸರಕು ರೈಲು ವರ್ಷ ಬಂದಿತ್ತು. ಇದುವೇ ರಾಜ್ಯದಲ್ಲಿ ಸಂಚರಿಸಿದ ಮೊದಲ ರೈಲು ಆಗಿತ್ತು. ಇದೀಗ ಬೈರಾಬಿಯಿಂದ ಐಜ್ವಾಲ್ ಸೈರಾಂಗ್ವರೆಗೆ ರೈಲು ಮಾರ್ಗವಾಗಿದ್ದು, ಸರಕು ರೈಲುಗಳಲ್ಲದೇ ಪ್ರಯಾಣಿಕರ ರೈಲುಗಳೂ ಸಂಚರಿಸಲಿವೆ.
  • 51.38 ಕಿ.ಮೀ. ಉದ್ದದ ಮಾರ್ಗದಲ್ಲಿ 48 ಸುರಂಗಗಳು, 55 ದೊಡ್ಡ ರೈಲು ಸೇತುವೆಗಳು, 88 ಸಣ್ಣ ಸೇತುವೆಗಳಿವೆ. 1.86 ಕಿ.ಮೀ. ಉದ್ದದ ಸುರಂಗವು ದೊಡ್ಡ ರೈಲು ಸುರಂಗ ಮಾರ್ಗವಾಗಿದ್ದರೆ, 114 ಮೀಟರ್‌ ಎತ್ತರದ ದೊಡ್ಡ ಸೇತುವೆಯೂ ಇದೆ. ಒಟ್ಟು ಆರು ಸೇತುವೆಗಳು ದೆಹಲಿಯ ಕುತುಬ್ಮೀನಾರ್ಗಿಂತ (72 ಮೀಟರ್‌) ಅಧಿಕ ಎತ್ತರವನ್ನು ಹೊಂದಿವೆ
  • ‘ಐಜ್ವಾಲ್‌ ಮತ್ತು ಕೊಲಸಿಬ್‌ ಜಿಲ್ಲೆಗಳಲ್ಲಿ ಸಾಗುವ ಈ ಮಾರ್ಗವನ್ನು ₹8,071 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೈರಾಬಿ, ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ನಿಲ್ದಾಣಗಳಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಒಂದೆರಡು ವಾರದಲ್ಲಿ ಉದ್ಘಾಟನೆಗೆ ಪ್ರಧಾನಿ ಕಚೇರಿಯಿಂದ ದಿನಾಂಕ ನಿಗದಿಯಾಗಲಿದೆ’ ಎಂದು ಈಶಾನ್ಯ ಗಡಿನಾಡು ರೈಲ್ವೆ (ನಾರ್ತ್‌ ಈಸ್ಟ್‌ ಫ್ರಾಂಟಿಯರ್‌ ರೈಲ್ವೆ) ಅಧಿಕಾರಿ.
  • ‘ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು, ಐಜ್ವಾಲ್‌ನಿಂದ ಗಡಿಭಾಗಗಳಿಗೂ ವಿಸ್ತರಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
  • ರೈಲು ಹಳಿಗಳೇ ಸೌರ ವಿದ್ಯುತ್ಸ್ಥಾವರ

ಸಂದರ್ಭ: ಈ ವರ್ಷದ ಜೂನ್‌ ಅಂತ್ಯದಲ್ಲಿ ಭಾರತೀಯ ರೈಲ್ವೆಗೆ ಸಂಬಂಧಿಸಿದ ಒಂದು ಪೋಸ್ಟ್‌ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ‘ಭಾರತವು ರೈಲು ಹಳಿಗಳನ್ನು ವಿದ್ಯುತ್‌ ಸ್ಥಾವರನ್ನಾಗಿ ಪರಿವರ್ತಿಸುತ್ತಿದೆ’ ಎಂದು ಆ ಪೋಸ್ಟ್‌ ಹೇಳಿತ್ತು.

  • ಸುಸ್ಥಿರ ಮೂಲಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಂತಹ ಬೆಳವಣಿಗೆ ಇದಾಗಿದ್ದು, ‘ಸನ್‌ ವೇಸ್‌’ (Sun Ways) ಎಂಬ ಭಾರತದ ಸ್ಟಾರ್ಟ್‌ಅಪ್‌ ಕಂಪನಿಯು ರೈಲು ಹಳಿಗಳ ಮಧ್ಯೆ ಸೌರಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್‌ ಉತ್ಪಾದಿಸಲು ಹೊರಟಿದೆ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು.
  • ದೇಶದ ಪ್ರಮುಖ ಸುದ್ದಿ ಸಂಸ್ಥೆ ಪಿಟಿಐ, ಜುಲೈ 7ರಂದು ಈ ಪೋಸ್ಟ್‌ ಬಗ್ಗೆ ಫ್ಯಾಕ್ಟ್‌ಚೆಕ್‌ ಮಾಡಿತ್ತು. ‘ಹಳಿಗಳ ನಡುವೆ ಸೌರಫಲಕಗಳನ್ನು ಅಳವಡಿಸುವ ಯೋಜನೆಯನ್ನು ಭಾರತೀಯ ರೈಲ್ವೆಯು ಕೈಗೆತ್ತಿಕೊಂಡಿಲ್ಲ; ಪೋಸ್ಟ್‌ನಲ್ಲಿರುವ ಚಿತ್ರ ಸ್ವಿಟ್ಜರ್ಲೆಂಡ್‌ಗೆ ಸಂಬಂಧಿಸಿ ದ್ದಾಗಿದ್ದು, ಸನ್ವೇ ಕಂಪನಿ ಭಾರತದ್ದಲ್ಲಸ್ವಿಟ್ಜರ್ಲೆಂಡ್ನದ್ದು. ಅಲ್ಲಿ ಅದು ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದೆ ಎಂದು ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿತ್ತು. 
  • ಇದಾಗಿ, ಒಂದೂವರೆ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಸ್ಟ್‌ ನಿಜವಾಗಿರುವ ಸುದ್ದಿ ಉತ್ತರ ಪ್ರದೇಶದಿಂದ ಬಂದಿದೆ. ವಾರಾಣಸಿಯಲ್ಲಿರುವ ಭಾರತೀಯ ರೈಲ್ವೆಯ ಬನಾರಸ್ಲೋಕೋಮೋಟಿವ್ವರ್ಕ್ಸ್‌ (ಬಿಎಲ್ಡಬ್ಲ್ಯು) ಘಟಕವು ಸದ್ದಿಲ್ಲದೇ ಹಳಿಗಳ ನಡುವೆ ಸೌರಫಲಕ ಗಳನ್ನು ಯಶಸ್ವಿಯಾಗಿ ಅಳವಡಿಸಿ ಸೂರ್ಯನ ಶಾಖದಿಂದ ವಿದ್ಯುತ್ಉತ್ಪಾದಿಸುವ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ. ಸ್ವಾತಂತ್ರ್ಯೋತ್ಸವದ ದಿನದಂದು ಯೋಜನೆಗೆ ಚಾಲನೆ ನೀಡಲಾಗಿದೆ.
  • 2030 ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ರೈಲ್ವೆ ಹೊಂದಿದ್ದು, ಆ ದಿಸೆಯಲ್ಲಿ ಈ ಪ್ರಾಯೋಗಿಕ ಯೋಜನೆ ಮಹತ್ವದ ಮೈಲಿಗಲ್ಲು ಎಂದು ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಮಾತ್ರವಲ್ಲ, 2070 ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ. ಅದನ್ನು ಸಾಧಿಸುವ ನಿಟ್ಟಿನಲ್ಲೂ ಈ ಯೋಜನೆ ಮಹತ್ವದ್ದು. ಸ್ವಿಟ್ಜರ್ಲೆಂಡ್‌ ಬಿಟ್ಟು ಬೇರೆ ದೇಶಗಳಲ್ಲಿ ಇಂತಹ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಭಾರತದಲ್ಲಂತೂ ಇದು ಮೊದಲ ಪ್ರಯತ್ನ.
  • ಬನಾರಸ್‌ನ ಲೋಕೋಮೋಟಿವ್ ವರ್ಕ್ಸ್‌ನ ಎಂಜಿನಿಯರ್‌ಗಳು ಈ ಯೋಜನೆಯ ರೂವಾರಿಗಳು. ಬಿಎಲ್‌ಡಬ್ಲ್ಯು ವರ್ಕ್ಸ್‌ಶಾಪ್‌ನ ಲೈನ್‌–19ರಲ್ಲಿ 70 ಮೀಟರ್‌ನಷ್ಟು ದೂರಕ್ಕೆ 28 ಸೌರಫಲಕ ಗಳನ್ನು ಅಳವಡಿಸಲಾಗಿದ್ದು, ಇದು 15 ಕಿಲೋ ವಾಟ್ನಷ್ಟು ಸೌರ ವಿದ್ಯುತ್ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ಕಿ.ಮೀ ಉದ್ದಕ್ಕೆ ಫಲಕ ಅಳವಡಿಸಿದರೆ 220 ಕಿಲೋ ವ್ಯಾಟ್ನಷ್ಟು ಸೌರವಿದ್ಯುತ್ಉತ್ಪಾದಿಸಬಹುದು. ಪ್ರತಿ ಕಿ.ಮೀನಲ್ಲಿ ಒಂದು ದಿನಕ್ಕೆ 880 ಯುನಿಟ್ಗಳಂತೆ ಒಂದು ವರ್ಷದಲ್ಲಿ 3.20 ಲಕ್ಷ ಯುನಿಟ್ಗಳಷ್ಟು ವಿದ್ಯುತ್ಉತ್ಪಾದಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.
  • ದೇಶದಲ್ಲಿ ರೈಲ್ವೆಯ ಜಾಲ 1.2 ಲಕ್ಷ ಕಿ.ಮೀನಷ್ಟು ಉದ್ದವಿದೆ. ಈ ತಂತ್ರಜ್ಞಾನವನ್ನು ರೈಲ್ವೆ ಯಾರ್ಡ್‌ಗಳಲ್ಲಿರುವ ಹೆಚ್ಚು ಬಳಕೆ ಯಲ್ಲಿರದ ಹಳಿಗಳಲ್ಲಿ ಬಳಸಬಹುದು. ಇದರಲ್ಲಿ ಸೌರಫಲಕಗಳ ಅಳವಡಿಕೆಗೆ ಹಳಿಗಳ ನಡುವಿನ ಖಾಲಿ ಜಾಗವನ್ನು ಬಳಸುವುದರಿಂದ ಯೋಜನೆಗಾಗಿ ಭೂಮಿಯನ್ನು ಸ್ವಾಧೀನ ಮಾಡುವ ಅಗತ್ಯವಿಲ್ಲ ಎಂಬುದು ಅಧಿಕಾರಿಗಳ ವಾದ.

ಫಲಕ ತೆರವುಗೊಳಿಸುವ ತಂತ್ರಜ್ಞಾನ

  • ಆಗಸ್ಟ್‌ 15ರಂದು ಯೋಜನೆಗೆ ಚಾಲನೆ ನೀಡುವ ವೇಳೆ ಸೌರಫಲಕಗಳನ್ನು ಅಳವಡಿಸಿದ 78 ಮೀಟರ್‌ ಉದ್ದದ ಹಳಿಯ ಮೇಲೆ ರೈಲು ಎಂಜಿನ್‌ ಅನ್ನು ಓಡಿಸಲಾಗಿತ್ತು. ಫಲಕ ಅಳವಡಿಕೆ ನಂತರ ಎದುರಾಗಬಹುದಾದ ಸವಾಲುಗಳನ್ನು ಪರಿಗಣಿಸಿಯೇ ಇದರ ವಿನ್ಯಾಸ ರೂಪಿಸಲಾಗಿದೆ. ದೇಶೀಯವಾಗಿ ವಿನ್ಯಾಸವನ್ನು ಸಿದ್ಧಪಡಿಸ ಲಾಗಿದೆ. ರೈಲು ಸಂಚರಿಸುವಾಗ ರೈಲು ಹಳಿಗಳು ಅದುರುವುದರಿಂದ, ಇದರ ಪ್ರಭಾವವನ್ನು ಕಡಿಮೆ ಮಾಡುವುದಕ್ಕಾಗಿ ಫಲಕಗಳಿಗೆ ರಬ್ಬರ್‌ ಚೌಕಟ್ಟುಗಳನ್ನು ಹೊಂದಿರುವ ಪ್ಯಾಡ್‌ ಬಳಸಲಾಗಿದೆ. ಹಳಿಯ ಕೆಳಗೆ, ಜಲ್ಲಿ ಮೇಲೆ ಹಾಕಲಾಗಿರುವ ಕಾಂಕ್ರೀಟ್‌ ಪಟ್ಟಿಗೆ ಫಲಕಗಳನ್ನು ಅಂಟಿಸಲಾಗಿದೆ. ಇದಕ್ಕಾಗಿ ಎಪಾಕ್ಸಿ ಅಂಟನ್ನು ಬಳಸಲಾಗಿದೆ. ಹಳಿ ನಿರ್ವಹಣೆ, ಸ್ವಚ್ಛತೆಗಾಗಿ ಫಲಕಗಳನ್ನು ಸುಲಭವಾಗಿ ತೆರವುಗೊಳಿಸಬಹುದು ಎಂಬುದು ಅಧಿಕಾರಿಗಳ ವಿವರಣೆ.

ಶೂನ್ಯ ಇಂಗಾಲ ಗುರಿಯೆಡೆಗೆ

  • ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆಯ ಮೂಲಕ ನಿರ್ವಹಣಾ ವೆಚ್ಚವನ್ನು ಉಳಿತಾಯ ಮಾಡಲು ಯತ್ನಿಸುತ್ತಿರುವ ರೈಲ್ವೆಯು ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸಿ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವತ್ತ ದೃಷ್ಟಿ ನೆಟ್ಟಿದೆ. ವರ್ಷದ ಫೆಬ್ರುವರಿ ಅಂಕಿಅಂಶಗಳ ಪ್ರಕಾರ, ರೈಲ್ವೆಯು ಈವರೆಗೆ ದೇಶದಾದ್ಯಂತ ಇರುವ 2,249 ರೈಲ್ವೆ ನಿಲ್ದಾಣಗಳು ಹಾಗೂ ಇತರ ಕಟ್ಟಡಗಳಲ್ಲಿ ಒಟ್ಟು 209 ಮೆಗಾ ವಾಟ್ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಿದೆ.
  • ಹಳಿಗಳ ನಡುವಿನ ಖಾಲಿ ಜಾಗ ಬಳಸಿ ಸೌರ ವಿದ್ಯುತ್‌ ಉತ್ಪಾದಿಸುವ ರೈಲ್ವೆಯ ಯೋಜನೆಯು 2030ರ ವೇಳೆಗೆ ಇಂಗಾಲ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿ ಸಾಧನೆಯ ದಿಸೆಯಲ್ಲಿ ಮತ್ತೊಂದು ಪ್ರಯತ್ನ.
  • ಆಂಧ್ರಪ್ರದೇಶ: ರೋಗಿಯಲ್ಲಿಮೆಲಿಯೊಯಿಡೊಸಿಸ್ದೃಢ

ಸಂದರ್ಭ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತುರಕಪಲೆಂ ಗ್ರಾಮದ ರೋಗಿಯೊಬ್ಬರಲ್ಲಿ ‘ಮೆಲಿಯೊಯಿಡೊಸಿಸ್’ (ಬ್ಯಾಕ್ಟೀರಿ ಯಾದಿಂದ ಹರಡುವ ಸೋಂಕು) ಇರುವುದು ದೃಢಪಟ್ಟಿದೆ.

  • 1,200 ಜನರು ವಾಸಿಸುತ್ತಿರುವ ಈ ಪುಟ್ಟ ಗ್ರಾಮದಲ್ಲಿ ಜುಲೈನಿಂದ ಇದುವರೆಗೆ ನಿಗೂಢ ಆರೋಗ್ಯ ಸಮಸ್ಯೆಗಳಿಂದಾಗಿ 23 ಮಂದಿ ಮೃತ ಪಟ್ಟಿದ್ದರು. ಸರಣಿ ಸಾವುಗಳ ನಡುವೆಯೇ ಬ್ಯಾಕ್ಟೀರಿಯಾ ಸೋಂಕಿನ ಮೊದಲ ಪ್ರಕರಣ ದೃಢಪಟ್ಟಿದೆ.
  • ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 46 ವರ್ಷದ ರೋಗಿಯಲ್ಲಿ ‘ಮೆಲಿಯೊಯಿಡೊಸಿಸ್’ ಸೋಂಕು ಇರುವುದು ದೃಢಪಟ್ಟಿದೆ ಎಂದು ಗುಂಟೂರು ಜಿಲ್ಲಾಧಿಕಾರಿ ಎಸ್‌.ನಾಗಲಕ್ಷ್ಮಿ ಮಂಗಳವಾರ ಹೇಳಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಈ ಗ್ರಾಮದಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ತಲಾ 10 ಮಂದಿ ಹಾಗೂ ಸೆಪ್ಟೆಂಬರ್‌ನಲ್ಲಿ ಮೂವರು ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ. ಇವರಲ್ಲಿ ಆರಂಭದಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಬಳಿಕ ಅಂಗಾಂಗ ವೈಫಲ್ಯಗೊಂಡು ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕರು 55 ವರ್ಷದವರಾಗಿದ್ದರು.
  • ಪರಿಷ್ಕೃತ ಎಂಆರ್ಪಿ ಪ್ರಕಟಿಸಿ: ಸೂಚನೆ

ಸಂದರ್ಭ: ಉತ್ಪನ್ನಗಳ ತಯಾರಕರು ಮತ್ತು ಆಮದುಗಾರರು ಜಿಎಸ್‌ಟಿ ದರದಲ್ಲಿ ಆಗಿರುವ ಪರಿಷ್ಕರಣೆ ಯನ್ನು ಪ್ರತಿಫಲಿಸುವ ರೀತಿಯಲ್ಲಿ ಹೊಸ ಎಂಆರ್‌ಪಿ ದರವನ್ನು ಉತ್ಪನ್ನಗಳ ಮೇಲೆ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

  • ಉತ್ಪನ್ನಗಳನ್ನು ಪ್ಯಾಕ್‌ ಮಾಡಲು ಬಳಸುವ ಪೊಟ್ಟಣಗಳ ಮೇಲೆ ಹಳೆಯ ಎಂಆರ್‌ಪಿ ಇದ್ದರೆ, ಅವುಗಳನ್ನು ಡಿಸೆಂಬರ್‌ 31ರವರೆಗೆ ಅಥವಾ ಅವುಗಳ ದಾಸ್ತಾನು ಇರುವವರಿಗೆ (ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯ) ಬಳಕೆ ಮಾಡಬಹುದು ಎಂದು ಹೇಳಿದೆ. ಆದರೆ, ಇಂತಹ ಪೊಟ್ಟಣಗಳ ಮೇಲೆ ಪರಿಷ್ಕೃತ ಎಂಆರ್‌ಪಿಯನ್ನೂ ಪ್ರಕಟಿಸಬೇಕಾಗುತ್ತದೆ.
  • ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಜಿಎಸ್‌ಟಿ ಮಂಡಳಿ ತಗ್ಗಿಸಿದೆ. ಪರಿಷ್ಕೃತ ಜಿಎಸ್‌ಟಿ ದರವು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರವು ಕಂಪನಿಗಳಿಗೆ ಈ ಸೂಚನೆ ನೀಡಿದೆ.
  • ‘ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದುದಾರರು ಮಾರಾಟವಾಗದ ಉತ್ಪನ್ನಗಳ ಮೇಲಿನ ಎಂಆರ್‌ಪಿ ದರವನ್ನು ಡಿಸೆಂಬರ್‌ 31ರವರೆಗೆ (ಅಥವಾ ದಾಸ್ತಾನು ಖಾಲಿಯಾಗುವವರೆಗೆ) ಪರಿಷ್ಕರಿಸ ಬಹುದು. ಪರಿಷ್ಕರಿಸುವ ದರವು ಜಿಎಸ್‌ಟಿಯಿಂದ ಆದ ಬದಲಾವಣೆಯನ್ನು ಮಾತ್ರ ತೋರಿಸಬೇಕು. ತೆರಿಗೆಯಿಂದ ಆದ ಹೆಚ್ಚಳ ಅಥವಾ ಇಳಿಕೆಯನ್ನು ಮಾತ್ರ ಅದರಲ್ಲಿ ತೋರಿಸಬಹುದು’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎಕ್ಸ್‌ ಮೂಲಕ ತಿಳಿಸಿದ್ದಾರೆ.
  • ಸ್ಟಿಕ್ಕರ್ ಬಳಸಿ, ಸ್ಟ್ಯಾಂಪ್ ಬಳಸಿ ಅಥವಾ ಆನ್‌ಲೈನ್‌ ಪ್ರಿಂಟ್ ಮೂಲಕ ಪರಿಷ್ಕೃತ ಎಂಆರ್‌ಪಿಯನ್ನು ತೋರಿಸಬಹುದು. ಜೊತೆಯಲ್ಲೇ, ಮೂಲ ಎಂಆರ್‌ಪಿ ಕೂಡ ಕಾಣುವಂತೆ ಇರಬೇಕು ಎಂದು ಸೂಚಿಸಲಾಗಿದೆ. ಬೆಲೆಯಲ್ಲಿನ ಪರಿಷ್ಕರಣೆಗೆ ಸಂಬಂಧಿಸಿದಂತೆ ತಯಾರ ಕರು, ಪ್ಯಾಕ್‌ ಮಾಡುವವರು ಅಥವಾ ಆಮದುದಾರರು ಕನಿಷ್ಠ ಎರಡು ಜಾಹೀರಾತುಗಳನ್ನು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪತ್ರಿಕೆಗಳ ಮೂಲಕ ನೀಡಬೇಕಿದೆ.
  • ಬೆಲೆ ಪರಿಷ್ಕರಣೆ ಬಗ್ಗೆ ಗ್ರಾಹಕರಿಗೆ ಜಾಹೀರಾತು ಹಾಗೂ ಸಾರ್ವಜನಿಕ ನೋಟಿಸ್‌ ಮೂಲಕ ಮಾಹಿತಿ ನೀಡಬೇಕು. ಇದರಿಂದಾಗಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಜೋಶಿ ಅವರು ಹೇಳಿದ್ದಾರೆ.
  • ರಾಜಕೀಯ ಅಸ್ಥಿರತೆಯ ನೋಟ
  • ನಾಮಕಾವಸ್ಥೆ ಮುಖ್ಯಸ್ಥರುನಿಯಮಗಳ ಪ್ರಕಾರ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ: ಕರ್ನಾಟಕ ವಾದ

ಸಂದರ್ಭ: ಸಂವಿಧಾನದ ಪ್ರಕಾರ, ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕೇವಲ ನಾಮಕಾವಸ್ಥೆ ಮುಖ್ಯಸ್ಥರು. ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದ ಸಲಹೆ ಮೇರೆಗೆ ಕಾರ್ಯನಿರ್ವಹಿಸಲು ಬದ್ಧರು ಎಂದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪ್ರತಿಪಾದಿಸಿದೆ.

  • ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ವಿಷಯದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಳಿರುವ ಸಲಹೆಗೆ ಸಂಬಂಧಿಸಿದ ವಿಚಾರಣೆ ವೇಳೆ ಕರ್ನಾಟಕ ಈ ಅಭಿಪ್ರಾಯ ವ್ಯಕ್ತಪಡಿಸಿತು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯನ್‌ ವಾದ ಮಂಡಿಸಿದರು.
  • ‘ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆ. ಇದು ಭಾರತದಲ್ಲಿ ಆಡಳಿತದ ಮೂಲಭೂತ ಕಲ್ಪನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್ ಇದನ್ನು ಅನುಮೋದಿಸಿದೆ‘ ಎಂದು ಅವರು ವಾದಿಸಿದರು.
  • ‘ನಿಯಮಗಳ ಪ್ರಕಾರ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ. ರಾಜ್ಯಪಾಲರು ಮಸೂದೆಯನ್ನು ಮರುಪರಿಶೀಲನೆಗಾಗಿ ವಿಧಾನಸಭೆಗೆ ಮರಳಿಸುವ ಉದ್ದೇಶದಿಂದ ಅಂಕಿತ ಹಾಕುವುದನ್ನು ತಡೆಹಿಡಿಯುವ ಅಧಿಕಾರವನ್ನಷ್ಟೇ ಹೊಂದಿದ್ದಾರೆ. ಆದರೆ, ವಿಧಾನಸಭೆಯಲ್ಲಿ ಮತ್ತೊಮ್ಮೆ ಮಸೂದೆ ಅನುಮೋದನೆಗೊಂಡಲ್ಲಿ ರಾಜ್ಯಪಾಲರು ಅಂಕಿತ ನೀಡಲೇಬೇಕ’ ಎಂದು ವಾದಿಸಿದರು. ‘ಸಂಸದೀಯ ಪ್ರಜಾಪ್ರಭುತ್ವವು ಶಾಸಕಾಂಗದ ಮೂಲಕ ವ್ಯಕ್ತವಾಗುವ ಸಾಮೂಹಿಕ ಅಭಿವ್ಯಕ್ತಿಯಾಗಿದೆ. ಕಾರ್ಯಾಂಗವು ಶಾಸಕಾಂಗದಿಂದ ರೂಪುಗೊಳ್ಳುತ್ತದೆ ಮತ್ತು ಅದಕ್ಕೆ ಉತ್ತರದಾಯಿಯಾಗಿರುತ್ತದೆ. ಕಾನೂನನ್ನು ರೂಪಿಸುವ ಅಂತಿಮ ಜವಾಬ್ದಾರಿ ಶಾಸಕಾಂಗದ ಮೇಲಿದೆ‘ ಎಂದು ಅವರು ಹೇಳಿದರು.

ಸೂಕ್ತ ಸಮಯದಲ್ಲಿ ಮಸೂದೆಗೆ ಅಂಗೀಕಾರ: ಸುಪ್ರೀಂ ಸಲಹೆ 

  • ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳಿಗೆ ಅಂಕಿತ ಹಾಕುವ ಅಧಿಕಾರ ನೀಡುವ ಸಂವಿಧಾನದ 200 ನೇ ‍ಪರಿಚ್ಛೇದದಲ್ಲಿ ‘ಸಾಧ್ಯವಾದಷ್ಟು ಬೇಗ’ ಎಂಬ ಅಂಶ ಇಲ್ಲದೆ ಇದ್ದರೂ ಕೂಡ ರಾಜ್ಯಪಾಲರು ‘ಸೂಕ್ತ ಸಮಯ‘ದಲ್ಲಿ ಕ್ರಮ ಕೈಗೊಳ್ಳುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
  • ಎಂಟನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐದು–ಸದಸ್ಯರ ಸಾಂವಿಧಾನಿಕ ಪೀಠ, ‘ಕೇವಲ ಸಂವಿಧಾನವನ್ನಷ್ಟೇ ವಿಶ್ಲೇಷಿಸಲಾಗುವುದು, ವೈಯಕ್ತಿಕ ಪ್ರಕರಣಗಳನ್ನಲ್ಲ’ ಎಂದು ಸ್ಪಷ್ಟಪಡಿಸಿದೆ.
  • ‘ತುರ್ತು ಪ್ರಕರಣಗಳಲ್ಲಿ ರಾಜ್ಯಪಾಲರು 24 ಗಂಟೆಗಳ ಒಳಗೆ ಕಾರ್ಯ ನಿರ್ವಹಿಸಬೇಕಾಗಬಹುದು’ ಎಂದು ಪೀಠ ಹೇಳಿದೆ.
  • ಸಂವಿಧಾನ 200 ಪರಿಚ್ಛೇದವು ರಾಜ್ಯಪಾಲರಿಗೆ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳಿಗೆ ಅಂಕಿತ ನೀಡುವ, ಮಸೂದೆ ತಡೆ ಹಿಡಿಯುವ ಅಥವಾ ಮಸೂದೆಯನ್ನು ಮರಳಿ ಕಳುಹಿಸುವ ಅಥವಾ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಮೀಸಲಿರಿಸುವ ಅಧಿಕಾರ ನೀಡುತ್ತದೆ.
  • ಪರಿಚ್ಛೇದ 200ರ ಮೊದಲ ನಿಯಮದ ಅನುಸಾರ, ರಾಜ್ಯಪಾಲರು ತಮಗೆ ಬಂದ ಮಸೂದೆಯನ್ನು ಸಾಧ್ಯವಾಷ್ಟು ಶೀಘ್ರದಲ್ಲಿ ಅಂಕಿತ ಹಾಕಬೇಕು ಅಥವಾ  ಮರುಪರಿಶೀಲನೆಗಾಗಿ ಸದನಕ್ಕೆ ಮರಳಿ ಕಳುಹಿಸಬೇಕು (ಹಣಕಾಸಿನ ಮಸೂದೆ ಹೊರತುಪಡಿಸಿ). ವಿಧಾನಸಭೆಯಲ್ಲಿ ಅದನ್ನು ಮರುಪರಿಶೀಲಿಸಿ ಕಳುಹಿಸಿದ ನಂತರ ಅದಕ್ಕೆ ಅಂಕಿತ ಹಾಕುವುದಕ್ಕೆ ವಿಳಂಬ ಮಾಡಬಾರದು.
  • ಇಂದೋರ್, ಅಮರಾವತಿ, ದೇವಾಸ್ನಗರ ಪ್ರಥಮ
  • ಹಿಮಾಚಲಕ್ಕೆ ₹1,500 ಕೋಟಿ ನೆರವು

ಸಂದರ್ಭ: ಭಾರಿ ಮಳೆಯಿಂದಾಗಿ ತೀವ್ರ ಹಾನಿಗೆ ಒಳಗಾಗಿರುವ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು. ರಾಜ್ಯಕ್ಕೆ ತಕ್ಷಣಕ್ಕೆ ₹1,500 ಕೋಟಿ ಬಿಡುಗಡೆ ಮಾಡುವುದಾಗಿ ಅವರು ಘೋಷಣೆ ಮಾಡಿದರು.

  • ಜೂನ್‌ 20ರಿಂದ ಸೆಪ್ಟೆಂಬರ್‌ 8ರವರೆಗೆ ರಾಜ್ಯಕ್ಕೆ ಸುಮಾರು ₹4,122 ಕೋಟಿ ನಷ್ಟವಾಗಿದೆ. ಮಳೆ ಸಂಬಂಧಿತ ಅವಘಡ ಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ಹೇಳಿದರು. ಹೆಲಿಕಾಪ್ಟರ್‌ ಮೂಲಕ ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿ ಹಾನಿಯ ಮಾಹಿತಿ ಪಡೆದುಕೊಂಡರು.
  • ರಾಜ್ಯ ವಿಪತ್ತು ನಿರ್ವಹಣೆ ಪಡೆ ನಿಧಿಗೆ ಮತ್ತು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಗೆ ಕೇಂದ್ರ ಸರ್ಕಾರವು ನೀಡುವ ಹಣವನ್ನೇ ಮುಂಗಡವಾಗಿ (₹1,500 ಕೋಟಿ) ನೀಡಲಾಗುತ್ತಿದೆ. ಈ ನಿಧಿಗಳಿಗೆ ಎರಡನೇ ಕಂತಿನಲ್ಲಿ ಕೇಂದ್ರವು ಹಣ ಪಾವತಿ ಮಾಡಬೇಕಿತ್ತು.
  • ಮಳೆಹಾನಿ ಅಂದಾಜಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಈಗಾಗಲೇ ಸಚಿವರ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ. ಈ ತಂಡದ ವರದಿ ಬಂದ ಬಳಿಕ, ಕೇಂದ್ರ ಸರ್ಕಾರವು ಮುಂದಿನ ಹಂತದ ಆರ್ಥಿಕ ನೆರವು ನೀಡಲಿದೆ ಎನ್ನಲಾಗುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು.
  • ‘ಶಿಕ್ಷಣ, ಕೃಷಿ ಸೇರಿದಂತೆ ರಾಜ್ಯದಲ್ಲಿ ಹಲವು ಕ್ಷೇತ್ರಗಳಿಗೆ ಭಾರಿ ನಷ್ಟವಾಗಿದೆ. ಜನರ ಜೀವನ ಸಹಜಸ್ಥಿತಿಗೆ ಮರಳುವಂತೆ ಮಾಡಬೇಕಿದೆ ಇದಕ್ಕಾಗಿ ಬಹು ಆಯಾಮದ ಯೋಜನೆಗಳನ್ನು ರೂಪಿಸಬೇಕು’ ಎಂದು ಪ್ರಧಾನಿ ಹೇಳಿದರು.

ಪಂಜಾಬ್‌ಗೆ ₹1,600 ಕೋಟಿ ನೆರವು

  • ಪ್ರವಾಹದಿಂದ ತೀವ್ರ ಹಾನಿಗೆ ಒಳಗಾಗಿರುವ ಪಂಜಾಬ್‌ಗೆ ಪ್ರಧಾನಿ ಮೋದಿ ಅವರು ₹1,600 ಕೋಟಿ ನೆರವು ಘೋಷಣೆ ಮಾಡಿದರು. ರಾಜ್ಯಕ್ಕೆ ಈಗಾಗಲೇ ₹12 ಸಾವಿರ ಕೋಟಿ ನೆರವನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯಕ್ಕೆ ಸುಮಾರು ₹13 ಸಾವಿರ ಕೋಟಿ ನಷ್ಟವಾಗಿದೆ’ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಮನೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಲಾಯಿತು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments